ಮಾಯ್ಸನ ಊಂಕಾಟ

ಸಖೀ

Posted by: ಮಾಯ್ಸ on: June 23, 2009

ಸಖೀ,
ಸಖೀ ಎಂಬ ನಪುಂಸಕಪದದಿಂದ
ಸುಸಂಸೃತವಾಗಿ ನಿನ್ನುದ್ದೇಶಿಸಿ
ನಾನು ಕೊರೆವ ಕೊಸರು ಕವಿತೆಗಳ
ಮೇಲಾಣೆ
ಸಹಜವಾಗೇ ಕೊರೆವ ಕುಬುದ್ದಿಯ
ಅಸಹಜವರ್ತನೆಯ ವಿಶೇಷ ಕವಿ ನಾನು
ನನ್ನ ಕವಿತಾಹಿಂಸೆಗೆ ಸೊರಗಿ ನೀನು
ಎಲ್ಲಿ ಹೋದೆ.
ನಿನ್ನ ಕರೆಲಿಕ್ಕೆ ನನ್ನ ತಲೆಕೆರೆದು
ಕೂದಲುದರಿಸಿ ಹೊಳೆಯಿಸುವ
ಪದಬಲಾತ್ಕಾರದ ಚೀತ್ಕಾರದ
ಕವನಗಳು
ನಯವಾದ ನನ್ನ ತರಾತಮ್ಯ
ವಚನಗಳೆಲ್ಲ ಸ್ವಭ್ರಾಂತ್ಯುನ್ನತ
ವಾಕ್ಸರಿತದ ಮೋರಿಸಲಿಲಜ
ಕಮಲಪುಷ್ಫ
ಬಾ ಬಂದು ಬಿಡು ನನ್ನೀ
ಉನ್ನತಾಧಮದ ತಾರತಮ್ಯದ
ಗಬ್ಬುನಾತದ ಕುಸುಮವನ್ನು
ಮುಡಿದು ಮುದ್ದಾಡು
ಅದೇ ಶ್ರೇಷ್ಠವೇಕೆಂದರೆ
ಅದು ನಾನು ನಾನತ್ವದಿಂದ
ನನಗಾಗಿ ಬರೆದ ನನ್ನ ಸಭ್ಯ
ಉನ್ನತ ಕವನ
ತಮಾಷೆಗೆ! :)

ಸಖೀ,

ಸಖೀ ಎಂಬ ನಪುಂಸಕಪದದಿಂದ

ಸುಸಂಸೃತವಾಗಿ ನಿನ್ನುದ್ದೇಶಿಸಿ

ನಾನು ಕೊರೆವ ಕೊಸರು ಕವಿತೆಗಳ

ಮೇಲಾಣೆ

ಸಹಜವಾಗೇ ಕೊರೆವ ಕುಬುದ್ದಿಯ

ಅಸಹಜವರ್ತನೆಯ ವಿಶೇಷ ಕವಿ ನಾನು

ನನ್ನ ಕವಿತಾಹಿಂಸೆಗೆ ಸೊರಗಿ ನೀನು

ಎಲ್ಲಿ ಹೋದೆ.

ನಿನ್ನ ಕರೆಲಿಕ್ಕೆ ನನ್ನ ತಲೆಕೆರೆದು

ಕೂದಲುದರಿಸಿ ಹೊಳೆಯಿಸುವ

ಪದಬಲಾತ್ಕಾರದ ಚೀತ್ಕಾರದ

ಕವನಗಳು

ನಯವಾದ ನನ್ನ ತರಾತಮ್ಯ

ವಚನಗಳೆಲ್ಲ ಸ್ವಭ್ರಾಂತ್ಯುನ್ನತ

ವಾಕ್ಸರಿತದ ಮೋರಿಸಲಿಲಜ

ಕಮಲಪುಷ್ಫ

ಬಾ ಬಂದು ಬಿಡು ನನ್ನೀ

ಉನ್ನತಾಧಮದ ತಾರತಮ್ಯದ

ಗಬ್ಬುನಾತದ ಕುಸುಮವನ್ನು

ಮುಡಿದು ಮುದ್ದಾಡು

ಅದೇ ಶ್ರೇಷ್ಠವೇಕೆಂದರೆ

ಅದು ನಾನು ನಾನತ್ವದಿಂದ

ನನಗಾಗಿ ಬರೆದ ನನ್ನ ಸಭ್ಯ

ಉನ್ನತ ಕವನ

ರಸ್ತೆ

ರಸ್ತೆ ಮಾರ್ಗ ದಾರಿ ಬೀದಿ

ಓಣಿ ಗಲ್ಲಿ ರೋಡು ಹಾದಿ

ಎಶ್ಟೊಂದು ಹೆಸರುಗಳು

ಬರೀ ಸರಿದಾಡುವ ನೆಲಕ್ಕೆ?

ಚಲನೆ

ಬಿರಬಿರನೆ ಮೆಲ್ಲನೆ

ಡಬ್ಬಕ್ಕನೆ ಮೆತ್ತಗೆ

ತೆವಳು ಓಡು ನಡೆ

ಅಯ್ಯೋ..ಸದ್ಯ ಚಲನೆ ಇದೆಯಲ್ಲ!

ಪವಾಡಗಾರ ವಿಜ್ನಾನ

ಕೀಬೋರ್ಡು ಮವ್ಸು ಮಿನ್ತೆರೆ

ಕಪ್ಪುಡಬ್ಬದ ಪ್ರೊಸೆಸರ್ರ‍ ರ್‍ಯಾಮು

ವಯ್ರುಗಳು ಮೋಡೆಮ್ಮು ಇಂಟರ್‍ನೆಟ್ಟು

ಹಾ.. ಕೂತಲ್ಲೇ ವಿಸ್ಮಯ ಲೋಕ

ಭಲೆ ವಿಜ್ನಾನ! ಪವಾಡಪುರುಷ ದಿವ್ಯ ನೀನು

ಕಕ್ಕಸ್ಸು ಮತ್ತು ವಾಸ್ತು

Posted by: ಮಾಯ್ಸ on: April 7, 2009

[ ಇದನ್ನು ದಯವಟ್ಟು ನಗೆ ಎಂದು ತೆಗೆದುಕೊಳ್ಳಿರಿ .. ಅಸಯ್ಯ ಅನ್ನಿಸಬೋದು]

ಟಿವಿ ಹಾಕಿದೆ.. ನಮ್ಮ ಯೆಮ್ಮೆಯ ಪ್ರತೀಕ ’ಕಚ್ತಾರ್ರಿ‍ ಕಸ್ತೂರಿ’ ಚಾನಲ್ ಬಂತು. ಅದ್ರಾಗೆ ಏನಪ್ಪ ಪ್ರೋಗ್ರಾಮು ಅಂದ್ರೆ..”ಉತ್ತಮ ಜೀವನಕ್ಕೆ ವಾಸ್ತು”

ಸರಿ ಅದೇನ್ ನೋಡಣ ಅಂತ ಕೂತೆ… ಸುರು..

ಪಾತ್ರಪರಿಚಯ

ವಾಸ್ತುಗಾರ: ಅಲಿಯಾಸ್ ಸ್ವಾಮೀಜಿ ಹತ್ತೂ ಬೆರಳುಗಳಿಗೆ ದೊಡ್ಡ ದೊಡ್ಡ ಹೊಳೆಯುವ ಚಿನ್ನದ ಉಂಗುರ ಹಾಕ್ಕೊಂಡಿದ್ರು. ಕಯ್ಯಿಗೆ ಕಡಗ. ಎದೆ ಬಿಟ್ಕೊಂಡು ದೊಡ್ಡ ಜರಿಜರಿ ಶಾಲು ವೊದ್ಕೊಂಡಿದ್ರು.. ತಲೆಬೋಳಿಸಿ ಜುಟ್ಟಬುಟ್ಟಿದ್ರು. ದೊಡ್ಡದಾಗಿ ನಾಮ ಏರಿಸಿದ್ರೂ. ವಸಿ ಮೇಕಪ್ ಮಾಡಿಕೊಂಡು ತುಟಿಗೆ ನಸುಗೆಂಪು ಬಳಿದುಕೊಂಡಿದ್ರು.

ಆಕೆ: ಅಲಿಯಾಸ್ ನಿರೂಪಣೆಗಾರ್ತಿ. ಅಚ್ಚಕಟ್ಟಾಗಿ ಸಿಲ್ಕ್ ಸೀರೆ. ಕುತ್ತಿಗೆ ತಾಳಿಯಿಲ್ಲದ ಬಂಗಾರದ ಒಂದು ಚಯ್ನು. ಕಿವಿಗೆ ಒಂದು ಜೊತೆ ಜುಮುಕಿ. ಸೀರೆಗೆ ಮ್ಯಾಚಿಂಗ್ ರವಕೆ. ವಾಸ್ತುಗಾರನಿಗಿಂತ ಕಡಮೆ ಹೊಳಪಿನ ಮೇಕಪ್ಪು!

ಸಂಬಾಸಣೆ.

ವಾಸ್ತುಗಾರ : ಇಂದಿನ ಸಂಚಿಕೆಯಲ್ಲಿ, ನಾವು ಕಕ್ಕಸ್ಸುಮನೆಯನ್ನು ವಾಸ್ತುವಿನಂತೆ ಹೆಂಗೆ ಕಟ್ಟಬೇಕು ಎಂದು ನೋಡಣ.

ಆಕೆ: ಸ್ವಾಮಿಜಿ” ಮೊದಲು ಕಕ್ಕಸ್ಸನ್ನು ವಾಸ್ತುವಿನಂತೆ ಕಟ್ಟದಿದ್ರೆ ಏನೇನೇನೇ ಆಗತ್ತೆ ವಸಿ ಯೋಳಿ.

ವಾ..ರ:ಮಲಬದ್ದತೆ, ಅತಿಬೇದಿ, ನೆಮ್ಮದಿಯ ಕೊರತೆ, ಸಂಸಾರದಲ್ಲಿ ಅಶಾಂತಿ, ಅತಿಗದ್ದಲ, ಆರೋಗ್ಯ ಸಮಸ್ಯೆ…

ಆಕೆ” ಅವ್ದಾ… ಹಂಗಾರೆ . ಯಾವ ಯಾವ ದಿಕ್ಕಿನಾಗೆ ಕಕ್ಕಸ್ಸು ಮಡಗಿದ್ರೆ ಏನೇನೇನಾಗ್ತಯ್ತೆ, ವಸಿ ಬಿಡಿಸಿ ಯೋಳಿ ಸಾಮಿಜಿ.

ವಾ..ರ:

…ನೋಡಮ್ಮಿ

… ವಾಯುವ್ಯ ಮೂಲೆಯಲ್ಲಿ ಮಲಾಲಯವನ್ನು ನಿರ್ಮಿಸಿದ್ರೆ, ಅತಿ ವಾತ,ವಾಯುಪೀಡೆ ಆ ಮಲಾಲಯದಲ್ಲಿ ಮಲವಿಸರ್ಜಿಸಿದವರಿಗೆಲ್ಲ……

ಆಕೆ: ಯಪ್ಪೋ.. ವಸಿ ಅರ್ತ ಆಗೋ ಹಂಗೆ ಯೋಳಿ.. ಆದೇನ್ ಪೀಡೆ ಅಂತ

ವಾ..ರ:

.. ಅಂದ್ರೆ ಸಿಕ್ಕಾಪಟ್ಟೆ ವೂಸು ಬತ್ತದೆ ಅಂತ ಕಣಮ್ಮಿ..

ಆಕೆ: (ಆತಂಕದಿಂದ ನಕ್ಕು) ಅವ್ದಾ.. ಮುಂದಿನ ದಿಕ್ಕು ಬಗ್ಗೆ ಅರ್ತ ಆಗೋ ಹಂಗೆ ಯೋಳಿ

ವಾ..ರ: ವೋಕ್ಕೊಳ್ಳಿ.. ನ

ಅಗ್ನೇಯ ಮೂಲೆಯಲ್ಲಿ ಮಡಗಿದ್ರೆ.. ವೋದಾಗ ಉರಿತದೆ…

ನಯ್ರುತ್ಯ ಮೂಲೆಯಲ್ಲಿ ಮಡಗಿದ್ರೆ.. ನೀರ್‍ ನೀರಾಗ್ ವೋಯ್ತದೆ…

ದಕ್ಶಿಣಕ್ಕೆ ಮಡಗಿದ್ರೆ ವೊಟ್ಟೆ ಕಟ್ತದೆ

ಪಶ್ಚಿಮಕ್ಕೆ ಮಡಗಿದ್ರೆ ಬೇದಿ ಆಯ್ತದೆ

ಅದಕ್ಕೆ ಉತ್ತರಕ್ಕೆ ಇಲ್ವಾ ಪೂರ್ವಕ್ಕೆ ಮಡಗಬೇಕು..

ಆಕೆ: ಅಲ್ಲ ಸಾಮಿ ಸಾಮಾನ್ಯ ಮುಂಬಾಕಿಲ್ನ ಉತ್ರ ಇಲ್ಲ ಪೂರ್ವಕ್ಕೆ ಅಲ್ವರ ಮಡಗೋದು.. ಏನ್ ನೀವ್ ಕಕ್ಕಸ್ಸನ್ನು ಬಾಕಿಲ ಪಕ್ಕ ಮಡಗು ಅಂದೀರಿ..? [ ಎಂದು ಮಗ್ದಕಣ್ಗಳನ್ನು ಪಿಳಿಪಿಳಿ ಮಿಟಿಕುಸುವಳು ]

ವಾ..ರ: [ಮುನಿಸಿಕೊಂಡು ದುರ ದುರ ದುರ ಎಂದು ಆಕೆಯನ್ನು ಹೆದರಿಸಲೆಂದೇ ಗುರಾಯಿಸಿ] ಲೇ ಅಮ್ಮಿ.. ನಿಂದು ಈಟುದ್ದ ಬಾಯಿ.. ಹೆಣ್ ವುಡಿಗಿ ಆಗಿ ಹಿಂಗೆ ಮಾತಾಡಕ್ಕೆ ನಾಚಿಕೆ ಆಗಕ್ಕೆಲ್ವ. ಬೊಡ್ಡಿ!

ಆಕೆ:[ ಅತ್ಕೊಂಡ್] ಈಕ್ಸಕರೇ.. ಇಲ್ಲಿಗೆ ನಮ್ ಕಾರಯಕರ್ಮ ಮುಗಿತು.. ವೋಗಿ ನಿಮ್ಮನೆ ಕಕ್ಕಸ್ಸು ಸರಿಯಾದ ದಿಕ್ಕಿಗೆ ಅಯ್ತಾ ನೋಡ್ಕಳಿ. ನಮ್‌ಸ್ಕಾರ

ಅಪ್ರಕೃತಿ

Posted by: ಮಾಯ್ಸ on: April 2, 2009

flickr ಇಂದ

flickr ಇಂದ

ತುಳಸಿಯ ಗಿಡಕ್ಕೆ

ಅರಿಶಿನ ಘಾಟು

ಪಾಪಾ ತುಳಸಿ

ತನ್ನ ’ಪವಿತ್ರತೆ’ಯಿಂದ

ಸೊರಗಿ ಸತ್ತಳು

ಇಲಿಯುಣಿ ಹಾವಿಗೆ

ಹಾಲಿಕ್ಕಿ ದೇವರೆಂದರು

ಪಾಪಾ ಹಾವಿಗೆ

ಹಾಲೇ ನಂಜು

ಹದುಳಗೆಟ್ಟು ಅಸುತೀರಿತು

ಬನದ ಮಾವುಬೇವಿಗೆ

ಯುಗಾದಿಯೆಂದು ಚಿಗುರು

ತಳಿರುಗಳ ಚಿವುಟಿ ತೋರಣ

ಕಟ್ಟಿ, ಅಬ್ಬರದ ಹಬ್ಬ ಮಾಡಿದರು

ಮಾವುಬೇವಿಗೆ ಗಾಯದ ನೋವು

ಹುಲ್ಲುಣಿ ಹಸುವಿಗೆ

ಹುಲ್ಲಿಲ್ಲ ಕಾಳಿಲ್ಲ

ಅನ್ನ ಇಡ್ಲಿ ತಿನ್ನಿಸಿ

ಹೊಟ್ಟೆಯುಬ್ಬಿಸಿದರು

ಪಾಪಾ ಆಕಳು ತನ್ನ

ಕೆಚ್ಚಲನ್ನು ಶಪಿಸಿಕೊಂಡಿತು

ನಿಶ್ಚಿಂತ ಮಂದಿಯ

ತಲೆಗೆ ಹೆದರಿಕೆಯ

ದೇವರನ್ನು ತುಂಬಿದರು

ಪಾಪಾ ಮಂದಿ

ಇರುಳೆಲ್ಲ ದೇವರ ಭಯ

ಈ ಬ್ಲಾಗ್ಲೇಖನವು ನಮ್ಮ ದೇಶದ ಏಕತೆ/ಒಕ್ಕಟ್ಟೆಂಬ ವಿಷಯವಾಗಿ ನನ್ನಭಿಪ್ರಾಯ ಮಂಡನೆಗೆ ಬರೆದ ಬರಹವೇ ಹೊರತು, ಯಾವ ತೀರ್ಮಾನವಲ್ಲ. ಇದರಲ್ಲಿ ತಪ್ಪುಗಳಿರುವವಕಾಶಗಳನ್ನೊಪ್ಪಿಕೊಳ್ಳುತ್ತೇನೆ.

ಸ್ವಾಭಾವಿಕ ದೇಶೀಯ ಚಿಂತನೆ/ರಾಷ್ಟ್ರೀಯ ಚಿಂತನೆ/ ರಾಷ್ಟ್ರವೆಂಬ ಪರಿಕಲ್ಪನೆಯ ಹುಟ್ಟು

ಸ್ವಾಭಾವಿಕ ರಾಷ್ಟ್ರೀಯತೆಯ ಚಿಂತನೆಗೆ ನಮ್ಮ ಕವಿರಾಜಮಾರ್ಗವೇ ದೊಡ್ಡುದಾರಣೆ.(ಶೆಲ್ಡನ್ ಪೋಲಾಕರ ಕರಾಮಾ ಬಗ್ಗಿನ ಟಿಪ್ಪಣಿ ನೋಡಿ. ದೇಶೀಯ/ರಾಷ್ಟ್ರೀಯ ಚಿಂತನೆ ಮಾಡಿದ ಮೊದಲ ಜನಾಂಗದ ಕನ್ನಡಿಗರು)

ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ

ಈ ಕವಿರಾಜಮಾರ್ಗದುದ್ಧೃತದಲ್ಲಿ ಗಮನಿಸಬೇಕಾದ ಪದಗಳು ’ಭಾವಿಸಿದ, ವಸುಧಾವಲಯ,ಜನಪದ’

ಭಾವಿಸಿದ = ಕನ್ನಡವೆಂಬ ಭಾವನೆ,ರಾಷ್ಟ್ರೀಯತೆ, ದೇಶೀಯತೆ,ಜನಾಂಗ ಚಿಂತನೆ, ಇಲ್ಲಿ ಒಂದು ಸಮೂಹವನ್ನು ಗುರುತಿಸುವ ಮತ್ತು ಒಕ್ಕಟ್ಟಿದ್ದು ಕನ್ನಡವೆಂಬ ಭಾವನೆ.
ವಸುಧಾವಲಯ = ವಸುಧೆ(ಭೂಮಿ), ವಲಯ(region,ಬಳೆ,boundary)
ಜನಪದ = ಜನಾಂಗ, ಬುಡಕಟ್ಟು

ಕಾವೇರಿಯಿಂದ ಗೋದಾವರಿ ವರೆಗೂ ಕನ್ನಡವೆಂಬ ಬುಡಕಟ್ಟಿನ (ಭೂ)ವಲಯವೆಂದ ಭಾವಿಸಿದ್ದರು.
ಇದು ಸ್ವಾಭಾವಿಕ (ಸಹಜ) ರಾಷ್ಟ್ರೀಯತೆ ಚಿಂತನೆ ethnic nationalismಗೆ ಉದಾಹರಣೆ.

ಯಾವಾಗಲೂ ವೊಂದೇ ಬಗೆಯ ಜನ(ಜನಾಂಗ) ತನ್ನ ಗುರುತುಗಳ ಸಲುವಾಗಿ ರಾಷ್ಟ್ರೀಯತೆಯನ್ನು ದೇಶೀಯ ಚಿಂತನೆ ಪರಿಕಲ್ಪನೆಗಳನ್ನು ಸ್ವಾಭಾವಿಕವಾಗಿಯೇ ಹೊಂದಿರುತ್ತದೆ.

ಸ್ವಾಭಾವಿಕ ಸಹಜ ರಾಷ್ಟ್ರ ಚಿಂತನೆ ಬರುವುದೇ ಒಂದು ಜನಾಂಗದ ಗುರುತಿಗಾಗಿ, ಒಂದು ಜನಾಂಗದ ನೇಟಿವಿಟಿಗಾಗಿ. ಸಾಮಾನ್ಯವಾಗಿ ಜನಾಂಗವನ್ನವರ ನುಡಿಯಿಂದ ಗುರುತಿಸಬಹುದು.

ಜಗತ್ತಿನ ಮುಂದುವರಿದ ಬಹುತೇಕ ರಾಷ್ಟ್ರಗಳಲ್ಲೂ ರಾಷ್ಟ್ರೀಯತೆಯೆಂಬುದು ಜನಾಂಗೀಯ ಮತ್ತು ಭಾಷಾಧಾರಿತ. ಅಮೆರಿಕವೊಂದೇ ಹಾಗೆ ನೋಡಿದ ಹಲಜನಾಂಗಗಳಿದ್ದೂ ಮುಂದುವರಿದ ದೇಶ. ಆದರೆ ಅಲ್ಲೂ ಪೆಡರಲ್ ವ್ಯವಸ್ಥೆಯಿದ್ದೂ ಪ್ರತಿಯೊಂದು ರಾಜ್ಯಕ್ಕೂ ತಕ್ಕಮಟ್ಟಿನ ಸ್ವಾಡಳಿತವಿದೆಯಂತೆ.

ಜಗತ್ತಿನಲ್ಲಿ ವಿಫಲವಾದ ದೇಶಗಳಲ್ಲಿ ಬಹುತೇಕವೂ ಹಲಜನಾಂಗವನ್ನು(Multiethnic) ಹೊಂದಿವೆ/ಹೊಂದಿದ್ದವು. ಉದಾಹರಣೆ ಇರಾಕ್, ಯುಗಾಸ್ಲೋವಿಯ, ಹಳೆಪಾಕಿಸ್ತಾನ( ಬಾಂಗ್ಲಾದೇಶದ ವಿಭಜನಾ ಪೂರ್ವ ), ಸ್ವೀಡನ್ನು(ಸ್ಕಾಡಿನೇವಿಯ), USSR ಹೀಗೆ.

ಆದರೆ ಒಂದೇ ಪ್ರಧಾನ ಜನಾಂಗವಿರುವ ಇಂಗ್ಲೆಂಡು, ಪ್ರಾಂಸು, ಜರ್ಮನಿ, ಜಪಾನು,ರಷ್ಯ,ಸ್ವೀಡನ್(ಈಗಿನ), ಪಿನ್ಲೆಂಡು, ನೋರ್ವೆ, ಸ್ಪೇನು(ಇಲ್ಲೂ ಪ್ರತ್ಯೇಕತೆಯ ಕೂಗಿದೆ) ಇವೆಲ್ಲ ಮುಂದುವರಿದ ದೇಶಗಳೇ. ಗ್ರೇಟ್ ಬ್ರಿಟನ್ನಲ್ಲೂ ಇಂಗ್ಲೆಂಡು, ಸ್ಕಾಟ್ಲೆಂಡು,ವೇಲ್ಸ ಮುಂತಾದ ದೇಶಗಳು ಜನಾಂಗಾಧಾರಿತವಾಗೇ ಯಾಗಿರುವುವು.

ನಮ್ಮ ದೇಶದೀ ಯಳ್ಳಕ ವ್ಯವಸ್ಥೆಗೆ ನಮ್ಮ ದೇಶದಲ್ಲಿರುವ ಹಲಜನಾಂಗಗಳ ನಡುವಣವಿಲ್ಲದ ಹೊಂದಾಣಿಕೆ, ಸಾಮರಸ್ಯವೇ ಕಾರಣ. ಹೊಂದಾಣಿಕೆಯಿಲ್ಲದಿರುವುದುಕ್ಕೆ ನುಡಿ/ಭಾಷೇ ಮತ್ತು ನಡೆಗಳು ಬೇರೆ ಬೇರೆಯಾಗಿರುವುದೇ ಪ್ರಧಾನ ಕಾರಣಗಳು. ನಮ್ಮಲ್ಲಿ ಪರಸ್ಪರರೊಡಂಬಡಿಕೆಗೆ ಸಂವಹನೆಗೆ ತೊಡಕೀ ಹಲನುಡಿಗಳು ಮತ್ತು ಹಲಜನಾಂಗಗಳು. ಇದೇ ನಮ್ಮ ದುರ್ಬಲೈಕತೆಗೆ ಕಾರಣ ಕೂಡ.

ಹಲವು ನುಡಿಗಳನ್ನಾಡುವ ಯಾವುದೇ ದೇಶದ ಜನರೆಂದೂ ವೊಂದೇ ನುಡಿಯನ್ನಾಡುವ ದೇಶದ ಜನರಷ್ಟು ಒಕ್ಕಟ್ಟಿನಲ್ಲಿರಲು ಸಾಧ್ಯವೇ ಯಿಲ್ಲ.
ಇರಬೇಕೆಂದು ಯಾರು ಯಾರು ಕರೆನೀಡಿ ಬೇಡಿಕೊಂಡರೂ ಅದು ಸಂಭವವಿಲ್ಲ…. ( ಇದು ಮನುಷ್ಯನ ಸಹಜ ವ್ಯವಸ್ಥೆ )

ಭಾರತ, ಇಂಡಿಯಯೆಂಬ ದೇಶವು ಸ್ವಾಭಾವಿಕ ಸಹಜವಾಗಾದುದಲ್ಲ. ಸಾಮಾನ್ಯ ದೇಶ ರಾಷ್ಟ್ರವೆಂಬ ಕಲ್ಪನೆಯೊಂದು ಜನಾಂಗ, ನುಡಿಯ ಜತೆ ಸೇರಿರುತ್ತದೆ.( ಸ್ವೀಡನ್, ಯುಗಾಸ್ಲೋವಿಯ, ರಷ್ಯ ದೇಶಗಳೊಡೆದುದನ್ನು ನೋಡಿರಿ ). ಹಲಜನಾಂಗೀಯ ದೇಶಗಳ ಭವಿಷ್ಯವು ಹೀಗೆಯೇ, ಒಡಕಿನದ್ದು!

ಮಾದರಿಯಾಗೊಂದು ಸನ್ನಿವೇಶ ಕಲ್ಪಿಸಿಕೊಳ್ಳೋಣ

ಇಂಗ್ಲೇಂಡಲ್ಲಿರುವ ಕೆಲಪ್ರೆಂಚರ ಮೇಲತ್ಯಾಚಾರವಾಯಿತೆಂದು ಬಹುಪ್ರೆಂಚರು ಇಂಗ್ಲೇಂಡಿನ ಮೇಲೆ ಸೇಡಿಟ್ಟುಕೊಳ್ಳುವುದು.ಈಗೊಂದು ವೇಳೆ ಇಂಗ್ಲೆಂಡಿನಲ್ಲಿ ಪ್ರೆಂಚರ ಸಂಖ್ಯೆಯು ಗಣನೀಯವಾಗಿದ್ದರೆ, ಫ್ರಾಂಸ್ದೇಶದ ಫ್ರೆಂಚರು ಮತ್ತು ಇಂಗ್ಲೆಂಡಿನ ಫ್ರೆಂಚರು ಸೇರಿಂಗ್ಲಿಶ್ ಮಂದಿಯ ಮೇಲೆ ದಾಳಿ ಮಾಡಬಹುದು, ಹಾಗೂ ಅದರಲ್ಲಿ ಯಶವನ್ನೂ ಕಾಣಬಹುದು.ಇಲ್ಲೀ ಬಹುಜನಾಂಗೀಯ ಇಂಗ್ಲೆಂಡಿಗೇ ಅಧಿಕಹಾನಿ ಹಾಗು ಬಹುಜನಾಂಗೀಯತೆಯನ್ನು ಹೆಚ್ಚು ನೆಲಕ್ಕಾಗೋ, ತಮ್ಮುದಾರತೆಯಿಂದಲೋ ವೊಪ್ಪಿಕೊಂಡ ಇಂಗ್ಲಿಶರಿಗೇ ಹೆಚ್ಚು ಹಾನಿ ಸಂಭವಿಸುವುದು. ಒಂದು ಜನಾಂಗದವರು ಮತ್ತೊಂದು ಜನಾಂಗದವರ ಮೇಲಾಡಳಿತವನ್ನು ನಡೆಸುವೆಲ್ಲಾ ವ್ಯವಸ್ಥೆಗಳೂ ತಾತ್ಕಾಲಿಕವಾದವು.
ಇದಕ್ಕೆ ಬಹುಸಂಖ್ಯಾತ ಇಂಗ್ಲಿಶರು ಅಲ್ಪಸಂಖ್ಯಾತ ಫ್ರೆಂಚರ ಮೇಲೆ ಇಂಗ್ಲೆಂಡಲ್ಲಿ ನಡೆಸಿದ ದಬ್ಬಾಳಿಕೆಯೂ ಕಾರಣವಿರಬಹುದು.

ಶ್ರಿಲಂಕೆಯ ತಮಿಳರು ಮತ್ತವರಿಗೆ ಭಾರತದ ತಮಿಳುನಾಡಿನ ಬೆಂಬಲವೂ ಯಿದಕ್ಕೆ ವಾಸ್ತವದುದಾಹರಣೆಯಾಗುವುದು. ಇಂದು ಪಾಕಿಸ್ತಾನದಲ್ಲಿ ನೆಲೆಸಿರುವ ಹಲವರು ಭಾರತದಿಂದ ವಲಸೆಯಾದವರೂ ಮತ್ತವರ ನೆಂಟರೂ ಯಿಷ್ಟರೂ ಭಾರತದಲ್ಲೇ ಯಿರುವುದನ್ನೂ ಗಮನಿಸಬೇಕು.

ಕಂತೆಗಳು

ನಾಳ್ಪಟ್ಟಿ

July 2009
S M T W T F S
« Jun    
 1234
567891011
12131415161718
19202122232425
262728293031  

ಅಟ್ಟ

ಲೆಕ್ಕಾಚಾರ

  • 3,943 ಸರತಿ ನೋಡಿದ್ದು

ಊಂಕಾಟಕ್ಕೆ ಹೆಚ್ಚಾಯ ಕಳಿಸಿದವರು

Flickr Photos

foggy morning

Statue of Liberty 2009

Lady Banks' Rose

More Photos