ಚರಿತ್ರೆಯ ಹೆಮ್ಮೆ

ನನಗೆ ಈ ಚರಿತ್ರೆ ಬಗ್ಗೆ ಮೊದಲಿಂದಲೂ ಒಂದು ಬಗೆಯ ಬೇರೆಯದೇ ಅನಿಸಿಕೆ ಇದೆ. ಅದು ಹಲವರಿಗೆ ಒಗ್ಗದೇ ಹೋದರೆ ಅದಕ್ಕೆ ಈಗಲೇ ಮನ್ನಿಪು-ಕೇಳಿಕೊಂಡು-ಬಿಡುತ್ತೇನೆ. ಯಾವಾಗಲೂ ಚರಿತ್ರೆ, ಅದರಲ್ಲೂ ನಮ್ಮ ಇಂಡಿಯದ ಚರಿತ್ರೆ, ಬರೀ ಅರಸತನದ, ಅರಸರ, ಅವರ ಮೋಜಿನ ಬದುಕಿನ ಸುತ್ತಲೇ ಇರುತ್ತೆ ಹಾಗೂ ಅದನ್ನೇ ಮರೆಸುತ್ತದೆ. ಅದು ಎಂದೂ ಆ ಹೊತ್ತಿನ ಸಾಮಾನ್ಯ ಮಂದಿಯ ಬದುಕು, ಅವರ ಕೋಟಲೆಗಳನ್ನು, ಅವರಲ್ಲಿದ್ದ ದಂಗೆ, ಹೋರಾಟದ, ದಬ್ಬಾಳಿಕೆ ನೋವನ್ನು ಕಡೆಯೆಣಿಸಿ ಬಿಡುತ್ತೆ. ಎಷ್ಟು ರಾಜರು ದಿಟದಲ್ಲಿ ಬರಗಾಲದಲ್ಲಿದ್ದ ಪ್ರಜೆಗಳಿಂದ ತೆರಿಗೆ ಕೇಳಿಲ್ಲ. ಬರದ ನಾಡಿನಲ್ಲಿ ಅರಮನೆಗಳನ್ನು ಕಟ್ಟಿಸಿಕೊಂಡಿಲ್ಲ!

ನಾವು ನಮ್ಮ ಹಿಂದಿನರಸರು ಕಟ್ಟಿದ ಕೋಟೆಗಳು, ಅರಮನೆಗಳು, ಆನೆಲಾಯಗಳು, ಕುದುರೆಲಾಯಗಳು, ಆ ಅರಸತನದ ಆನೆ, ಕುದುರೆಗಳಿಗೆ ಮೇಯಿಸ ಮೇವಿನ ಬಗ್ಗೆ ಹೆಮ್ಮೆ ಪಟ್ಟಿಕೊಂಡು ಬೀಗುತ್ತೇವೆ. ಅದೇ ಆ ಅರಸನು ನಾಡಿನಲ್ಲಿ ಮಂದಿಯಲ್ಲಿ ಎಷ್ಟು ಪ್ರಬುದ್ಧಚಿಂತನೆಗಳನ್ನು ಬೆಳೆಸಿದನು, ಅವರಿಗೆಷ್ಟು ವೈಯಕ್ತಿಕ ಸ್ವಾತಂತ್ರ‍್ಯ, ಅಭಿವಕ್ತಿ ಸ್ವಾತಂತ್ರ‍್ಯ, ವಿಚಾರ ಸ್ವಾತಂತ್ರ‍್ಯ, ಒಡೆತನದ ಸ್ವಾತಂತ್ರ‍್ಯಗಳನ್ನು ಕೊಟ್ಟಿದ್ದ ಎಂಬುದರ ಬಗ್ಗೆ ವಿಚಾರಿಸುವುದೇ ಇಲ್ಲ. ಸಾಮಾನ್ಯವಾಗಿ ನಮ್ಮ ಚರಿತ್ರೆಯ ತುಂಬಾ ಪ್ರಜೆಗಳೆಲ್ಲ ಅರಸ ದೇವರ ಸಮಾನ ಹಾಗೂ ತಾವೆಲ್ಲ ಅವನ ಊಳಿಗಕ್ಕಾಗಿರುವ ದಾಸರೆಂದೇ ಚಿತ್ರತವಾಗಿದೆ. ಇನ್ನೂ ವಿಜಯನಗರದ ಅವಸಾನದ ಹೊತ್ತಿಗೆ ಆ ಅರಸರು ಕನ್ನಡವನ್ನು ಎಷ್ಟು ಕಡೆಗಣಿಸಿ ಮೂಲೆಗಂಪಾಗಿಸಿದ್ದರು ಹಾಗೂ ತಾಳಿಕೋಟೆಯ ಬವರವು ಕನ್ನಡರು ಮತ್ತು ತೆಲುಗರ ನಡುವೆಯ ಕಿತ್ತಾಟವೆಂಬು ಬಣ್ಣಿಸುವ ಹೊತ್ತಗೆಯೂ ಇದೆ. ಹಾಗೇ ಮಯ್ಸೂರ ಅರಸು ಕೂಡ ಹೇಗೆ ಕನ್ನಡವನ್ನು ಕಡೆಗಣಿಸಿ, ತೆಲುಗು, ತಮಿಳು ಹಾಗೂ ಸಂಸ್ಕೃತಕ್ಕೆ ಒತ್ತಿತ್ತರು ಎಂಬುದನ್ನೂ ಅಲ್ಲಿ ಬಣ್ಣಿಸಿದ್ದಾರೆ.

ಅಂತಹ ಹೊತ್ತಗೆಯೊಂದು “ಕನ್ನಡ ಅರಸರ ಅಕನ್ನಡ ಪ್ರಜ್ಞೆ . ಲೇ|ಎಂ.ಎಂ.ಕಲಬುರ‍್ಗಿ”. ಅದನ್ನೂ ಕೂಡ ನಾವೆಲ್ಲ ಓದಬೇಕೆಂದು ನನ್ನ ಅನಿಸಿಕೆ.

ಗಮನಿಸಿರಿ: ಕೃಷ್ಣದೇವರಾಯನ ಅಷ್ಟದಿಗ್ಗಜರಲ್ಲಿ ಅಷ್ಟೂ ಕವಿಗಳು ತೆಲುಗರು ಹಾಗೂ ಆ ಕಾಲದಲ್ಲಿ ಕನ್ನಡ ಸಾಹಿತ್ಯ ಅವನ ಹಿಂದನರಸರಾದ ಪ್ರೌಢದೇವರಾಯ ಮುಂತಾದವರ ಕಾಲಕ್ಕೆ ಹೋಲಿಸಿದರೆ ಬಲು ಕಡಮೆ. ಹಾಗೂ ಕೃಷ್ಣದೇವರಾಯನು ರಚಿಸಿದ ಕೃತಿಗಳು ಸಂಸ್ಕೃತ ಮತ್ತು ತೆಲುಗಿನಲ್ಲಿವೆ. ಇನ್ನು ಸಾಮಾನ್ಯ ಮಂದಿಗೆ ಹೆಚ್ಚುಕಾಲ ಇರತಕ್ಕ, ಹಾಗು ಅವರ ಬದುಕುಗಳನ್ನು ಬದಲಿಸತಕ್ಕ ವೈಚಾರಿಕತೆಗಳನ್ನು ನನ್ನ ಜ್ಞಾನಪರಿಮಿತಿಯಲ್ಲಿ ಯಾವ ಅರಸನೂ ಮಾಡಿಲ್ಲ. ಅವರ ಪ್ರೋತ್ಸಾಹವೇನಿದ್ದರೂ ಆಸ್ಥಾನ ಪಾಂಡಿತ್ಯಕ್ಕೆ ಹಾಗೂ ಸಂಸ್ಕೃತಭರಿತ ಕಾವ್ಯಕೃಷಿಗೇ ಇತ್ತು.

ಈ ಅರಸರನ್ನು ಬಿಟ್ಟರೆ, ಸಾಮಾನ್ಯ ಮಂದಿಗೆ ಹೆಚ್ಚುಕಾಲ ಇರತಕ್ಕ, ಹಾಗು ಅವರ ಬದುಕುಗಳನ್ನು ಬದಲಿಸತಕ್ಕ ವೈಚಾರಿಕತೆಗಳನ್ನು (ನನ್ನ ಜ್ಞಾನಪರಿಮಿತಿಯಲ್ಲಿ) ನೀಡಿದ ಮಂದಿ ಬಸವಣ್ಣ, ಸರ್ವಜ್ಞ, ಅಲ್ಲಮ ಮುಂತಾದ ಶರಣರು ಹಾಗೂ ಹೊಸಗನ್ನಡದ ಶಿವರಾಮಕಾರಂತ, ಪೂಜಂತೇ ಮುಂತಾದವರು. ಅವರ ಬಗ್ಗೆ ನನಗೆ ವಿಜಯನಗರಕ್ಕಿಂತ ಹೆಚ್ಚಿನ ಹೆಮ್ಮೆಯ ಅನುಭವದ ಮನಸ್ಸಿದೆ.

ನನ್ನಿ

ಆರ‍್ಯ, ದ್ರಾವಿಡ ಎಂಬುವು ಬೇರೇ ಬೇರೇ ಎರಡು ರೇಸ್ಗಳು. ಇದು ದಿಟ!

 ಮೊದಲು ಈ ಕೊಂಡಿಗಳನ್ನೋದಿಕೊಳ್ಳಣ. 

  1. India’s caste system descended from two tribes ‘not colonialism’ – Times Online
  2. India’s caste system ‘is thousands of years old’, DNA shows  -Telegraph.co.uk
  3. Genetic diversity of Indian population studied – Hindu
  4. DNA trawl shows long history of India’s castes – Reuters India
  5. http://news.google.co.in/news/more?pz=1&ned=in&ncl=dQkIkHQpAbPEAbMbPWgIAFs0xMeKM&topic=t

ಇದರ ತಿರುಳು -

    Indians can trace between 39 per cent and 71 per cent of their ancestry to a population known as the Ancestral Northern Indians (ANI), who are quite closely related to Europeans and Asians. Those with a higher ancestral contribution from the ANI group are more likely to belong to higher castes, and to speak Indo-European languages such as Hindi and Bengali.

    The other ancient population are the Ancestral Southern Indians (ASI), who are not genetically close to any group outside the sub-continent. People with a higher ASI ancestry are more likely to belong to lower castes, and to speak non Indo-European languages such as Tamil.

ಇಂಡಿಯ ದೇಶದಾಗೇ ಎರಡು ತಳಿಗಳ, ಬುಡಕಟ್ಟುಗಳ(Race) ಜನರು ಇದ್ದಾರೆ.  ಅವು

  1. ಬಡಗು ತಲೆಮಾರು ತಳಿ. (ಬಡಕರು) 
  2. ತೆನ್ ತಲೆಮಾರು ತಳಿ. (ತೆನ್ನರು)

ಬಡಕರು ಯುರೋಪಿಗರು ( ಬ್ರಿಟೀಶರು, ಜರ‍್ಮನ್ನರು  ಪ್ರೆಂಚರು ಮುಂ..) ಹಾಗೂ  ಎಶೀಯಿಗರು ( ಇರಾನಿಗರು, ಪಾಕಿಸ್ತಾನಿಗರು, ಇರಾಕಿಗರು, ಅರಬ್ಬರು, ರಶ್ಯಿಗರು, ಚೀನಿಗರು, ಜಪಾನಿಗರು, ಟರ‍್ ಕಿಗರುರು ),  ಮುಂತಾದ ಇಂಡಿಯದ ಹೊರಗಿನ  ಮಂದಿಯೊಟ್ಟಿಗೆ  ಬಲು ಹತ್ತಿರದ ಜೀನ್ ನಂಟು ಹೊಂದಿದ್ದಾರೆ. ಹಾಗು ಅವರು ತಳಿಯಾಗಿ ಈ ಗುಂಪಿಗೆ ಸೇರುತ್ತಾರೆ. ಹಾಗೂ ಇವರು ಹಚ್ಚುಕಡಮೆ ಇಂಡಿಯದ ಮೇಲ್ಜಾತಿಗಳಿಗೆ ಸೇರಿದ್ದಾರೆ. ಇವರ ಆಡುನುಡಿ, ತಾಯ್ನುಡಿ, ಹಿಂದಿ, ಬಂಗಾಳಿ, ಪಂಜಾಬಿ ಮುಂತಾದ ಇಂಡೋ-ಆರ‍್ಯನ್ , ಇಂಡೋ ಯುರೋಪಿನ್ ನುಡಿಯಾಗಿವೆ. 

ತೆನ್ನರು,  ಇಂಡಿಯದಿಂದ ಹೊರಗೆ ಯಾವುದೇ ಗುಂಪಿನೊಟ್ಟಿಗೆ ಹತ್ತಿರದ ನಂಟು ಹೊಂದಿಲ್ಲ. ಹಾಗೂ ತೆನ್ನರು ಹೆಚ್ಚುಕಡಮೆ ಕೀಳ್ಜಾತಿಗೆ ಸೇರಿದ್ದಾರೆ ಹಾಗು ಇವರು ಇಂಡೋ-ಯುರೋಪಿನ್ ನುಡಿಗಳಲ್ಲದ, ದ್ರಾವಿಡ ನುಡಿಗಳಾದ ತಮಿಳು, ಕನ್ನಡ, ತೆಲುಗು, ಮಳಯಾಳಿ, ತುಳು, ಕೊಡವ, ತೋದ ಮುಂತಾದ ನುಡಿಗಳನ್ನು ತಾಯ್ನುಡಿ, ತಲೆಮಾರಿನ ನುಡಿಯಾಗಿ ಆಡುತ್ತಾರೆ.

The researchers wrote in the journal Nature: “Some historians have argued that caste in modern India is an ‘invention’ of colonialism, in the sense that it became more rigid under colonial rule. However, our results indicate that many current distinctions among groups are ancient and that strong endogamy [marriage within a group] must have shaped marriage patterns in India for thousands of years.”

“ ಬ್ರಿಟೀಶರು ಇಂದಿನ ಇಂಡಿಯದಲ್ಲಿ  ಜಾತಿ ಎಂಬುದನ್ನು ’ಹುಟ್ಟಿಸಿ’ದರು. ಹಾಗಾಗಿ ಜಾತಿ ಎಂಬುದು ಅವರು ಆಳುವಾಗಲೇ ಇನ್ನೂ ಪೆಡಸುಗೊಂಡಿತು. ಎಂದು  ಕೆಲ ಹಿನ್ನಡವಳಿಯರಿಗರು argue ಮಾಡಿದ್ದಾರೆ. ಆದಾಗ್ಯೂ ನಮ್ಮ ದೊರೆತಗಳು ಸುಟ್ಟುವಂತೆ ಈ ಗುಂಪುಗಳ ನಡುವೆ ಈಗಿರುವ ಹಲ ಗೆಂಟುಗಳು ಕಿಗ್ಗಳವಾದವು.  ಈ ಗುಂಪುಗಳು ಹೆಚ್ಚಾಗಿ ತಮ್ಮ ತಮ್ಮ ಗುಂಪಿನ  ಒಳಗಡೆಯವರೊಟ್ಟಿಗೇನೇ ಮದುವೆ/ಕೂಡಿಕೆಗಳನ್ನು ಮಾಡಿಕೊಳ್ಳುವ ಒಲುವು ಇಟ್ಟುಕೊಂಡು ಬಂದಿವೆ. ಈ ಬಗೆಯಲ್ಲಿ ತಮ್ಮ ಗುಂಪಿನವರೊಟ್ಟಿಗೇನೇ ಮದುವೆಯಾಗುವಿಕೆ, ಇಂಡಿಯದಲ್ಲಿ ಸಾವಿರಾರು ಏಡುಗಳಿಂದ ಇಂಡಿಯದ ಮದುವೆ-ಹಮ್ಮುಗೆಯ ಪಾಂಗನ್ನು ಸಮೆದುಕೊಂಡು ಬಂದಿದೆ”

ಎಂದು ಆ ಅರಕೆಕಾರರು ’Nature’ ಎಂಬ ಸುದ್ದಿಹಾಳೆಯಲ್ಲಿ  ಬರೆದಿದ್ದಾರೆ.

Lalji Singh, director of CCMB, said: “India is genetically not a single large population, but instead is best described as many smaller isolated populations.”

This insight has important medical implications for people of Indian origin, because groups that are descended from small founding populations often have a high incidence of inherited diseases. Ashkenazi Jews, for example, have a high risk of Tay-Sachs disease.

This may explain why several genetic conditions are more common in India than elsewhere: a mutation in a gene called MYBPC3, which raises the risk of heart failure sevenfold, is found in 4 per cent of Indians but is exceptionally rare elsewhere.

The only ethnic group who do not have this shared ancestry is the indigenous population of the Andaman Islands in the Indian Ocean, who appear to be of exclusively ASI descent.

ಹೀಗೆ ಇಂಡಿಯದಲ್ಲಿ ಎರಡು ತಳಿಗಳು ಸೇರಿರುವುದರಿಂದ, ಅಲ್ಲಿ ಹೆಚ್ಚು ಜೀನಿನ ತಾರುಮಾರುಗಳುಂಟಾಗಿ, ತಲೆಮಾರಿನಿಂದ ಬರುವ ಬೇನೆಗಳು ಹೆಚ್ಚಾಗಿ ಕಾಣುತ್ತವೆ.

ಈ ಹೊಸ ಹೊಳಹಿಂದ ನಮಗೆ ಹೇಗೆ, ಯಾಕೆ ಇಂಡಿಯದಲ್ಲಿ ಬಡಕರು ಹಾಗು ತೆನ್ನರು ಬೇರೆ ಬೇರೆಯಾಗಿ ಇದ್ದಾರೆ ಎಂಬುದಕ್ಕೆ ತಕ್ಕಮಟ್ಟಿನ ಅರಿಮೆಗಳು, ಒಳಹುಗಳು ಸಿಗುತ್ತವೆ.

 

ಪದನೆರವು

ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು

  1. race  =  ತಳಿ, ಬುಡಕಟ್ಟು
  2. north  = ಬಡಗ (ಬಡಗನಾಡು; ಬಡಗ ಬಾಗಿಲು; ಬಡಗಲು, ಬಡಗು)
  3. research  = ಅರಸು (ಅರಕೆ; ಅರಕೆಕಾರ)
  4. journal = ೧ ನಾಳ್ಕಡತ ೨ ನಡವಳಿ ಬರಪ ೩ ಸುದ್ದಿಹಾಳೆ, ಗಡುಕಡತ
  5. historian = ಹಿನ್ನಡವಳಿಯರಿಗ
  6. rigid = ೧ ಬಗ್ಗದ, ಪೆಡಸು, ಅಲುಗಾಡದ ೨ ಕಟ್ಟುನಿಟ್ಟಿನ
  7. argue ಇದಕ್ಕೆ ಪದ ಸಿಕ್ಕಲಿಲ್ಲ. 
  8. result  = ೧ ಆಗುಹ, ದೊರೆತ ೨ ಕೊನೆ, ಮುಗಿತಾಯ
  9. indicate = ತೋರಿಸು (ತೋರಿಸಿ ಕೊಡು – ಒಂದು ತಪ್ಪನ್ನು ತೋರಿಸಿಕೊಟ್ಟಿದ್ದೇನೆ), ತಿಳಿಸು, ಸುಟ್ಟು
  10. current (ಗುಣವಾಚಕ) = ಬಳಕೆಯಲ್ಲಿರುವ, ಇರುವ, ಸಲ್ಲುವ (ಸಲ್ಲುವ ಕಾಸು; ಸಲ್ಲದ ಕಾಸು)
  11. distinction (ನಾಮಪದ) = ಹಿರಿಮೆ, ಗೆಂಟು
  12. ancient (ಗುಣವಾಚಕ) = ಕಿಗ್ಗಳ (ಒಂದು ಕಿಗ್ಗಳ ಕತೆ), ಹಳೇಕಾಲದ
  13. pattern (ನಾಮಪದ) = ಹಮ್ಮುಗೆ, ಹಂಚಿಕೆ, ಮರುಪರಿಜು
  14. year (ನಾಮಪದ) = ಏಡು (ಆತ ಬಂದು ಏಡು ಹತ್ತಾಯಿತು), ಸೂಳು, ಸಾಲು
  15. shape (ನಾಮಪದ) = ಪಾಂಗು (ಪಾಂಗುಗೆಡು; ಪಾಂಗುವಡೆ), ಪರಿಜು (ಎಣ್ಪರಿಜು)
  16. construct (ಕ್ರಿಯಾಪದ) = ಸಮೆ, ಕಟ್ಟು (ಮನೆ ಕಟ್ಟು)
  17. disorder (ನಾಮಪದ) = ತಾರುಮಾರು (ತಾರುಮಾರು ಮಾಡುವವರನ್ನು ಯಾರು ನಂಬುತ್ತಾರೆ?)

ನನ್ನ ಪದವುಟ್ಟು

  1. ಬಡಕ. ( ತಿರುಗು => ತಿರುಕ,  ಅಡಗು => ಅಡಕ,  ಬಡಗು => ಬಡಕ )
  2. ತೆನ್ನ. ( ಕಣ್ => ಕಣ್ಣ, ಕಳ್ => ಕಳ್ಳ, ಮುಳ್ => ಮುಳ್ಳ, ತೆನ್ => ತೆನ್ನ )

ಸ್ವಾತಂತ್ರ್ಯ

ಸ್ವಾತಂತ್ರ‍್ಯ ಎಂಬುದು ಯಾರೋ ಕೊಡುವಂತಹದ್ದು, ಇಲ್ವೇ ಯಾರಿಂದಲೋ ಬೇಡಿ ಇಸಿದುಕೊಳ್ಳುವಂತಹದ್ದಲ್ಲ. ಅದೊಂದು ನಮ್ಮೊಳಗೇ ಇರೋ ನಮ್ಮತನ. ಅದನ್ನ ನಾವು ಬಳಸಿಕೊಳ್ಳೋ ಅವಕಾಶಗಳನ್ನು ಕಾಯ್ದುಕೊಂಡು ಹೋಗಬೇಕಶ್ಟೆ!

ಸ್ವಾತಂತ್ರ‍್ಯ ಅನ್ನೋದು ಸ್ವೇಚ್ಚಾಚಾರ ಎನ್ನುವುದಕ್ಕೆ ಸಮವೇ! ಸ್ವಾತಂತ್ರ‍್ಯವೆಂದರೇ ಸ್ವ-ಇಚ್ಛೆಗನುಗುಣವಾಗಿ ಬದುಕುವುದೆಂದೇ! ಆದುದರಿಂದ ಸ್ವಾತಂತ್ರ‍್ಯವಿದೆ ಎಂದರಲ್ಲಿ ತಾನು ಬಯಸಿದಂತೆ ಬದುಕಲನುವಿದೆ ಎಂದು ಅರ್ಥವೇ! ನಿಮಗೆ ಸ್ವಾತಂತ್ರ‍್ಯವಿದೆ ಆದರೆ ಸ್ವೇಚ್ಛಾಚಾರಕ್ಕೆ ಅವಕಾಶವಿಲ್ಲ ಎಂದು ಬಟ್ಟಂ ಬಯಲಲ್ಲಿ ಭಾಷಣ ಬಿಗಿಯೋರ ಮನಸಲ್ಲಿ ನಮ್ಮ ಸ್ವಾತಂತ್ರ‍್ಯಹರಣದ ಬುದ್ಧಿ ಇದೆ ಎಂದೂ, ಆ ಸ್ವಾತಂತ್ರ‍್ಯ ಹರಣಕ್ರಿಯೆಗೆ ಚಾಟಿ, ಹಗ್ಗ, ಬೇಡಿಗಳನ್ನಾಗಿ ಧರ್ಮ, ದೇವರು, ಸಂಸ್ಕೃತಿ, ದೇಶಭಕ್ತಿ, ಸ್ವಾಮಿನಿಷ್ಠೆ, ಋಣ ಮುಂತಾದವುಗಳನ್ನು ಬಳಸಿ ನಮ್ಮನ್ನು ಇಂತಿಪ್ಪ ಕಟ್ಟುಪಾಡುಗಳ ಸೆರೆಯೊಳೆಗೆ ಸೇರಿಸಿ ನಮ್ಮ ಬದುಕನ್ನು ಅವರ ಇಚ್ಛೆಯಂತೆ ಬದುಕಿಸುವ ಹೊನ್ನಾರ ಎಂದು ತಿಳಿದುಕೊಳ್ಳುವ ಜಾಣತನ, ಪ್ರಜ್ಞೆ ಇಲ್ಲದ ಹೋದರೆ ನಮಗೆಂದೂ  ಸ್ವಾತಂತ್ರ‍್ಯ ಇರುವುದಿಲ್ಲ. ಈ ಬಗೆಯ ಸೆರೆಗಾರರು ನಮ್ಮನ್ನು ಬೇಟಯಾಡಲು ಬೇರೆ ಬೇರೆ ವೇಷ, ಭಾಷೆ, ಕಾಲಗಳಲ್ಲಿ ಬಂದಿದ್ದಾರೆ, ಬರುತ್ತಿದ್ದಾರೆ ಹಾಗು ಬರುತ್ತಿರುತ್ತಾರೆ. ಒಮ್ಮೆ  ಎಚ್ಚರತಪ್ಪಿ ಸೆರೆಯಲ್ಲಿ ಸಿಕ್ಕಿ ಹಾಕಿಕೊಂಡರೆ, ಅದರಿಂದ ಹೊರಬರಲು ಪೀಳಿಗೆಗಳೇ ಪ್ರಾಣ, ದಾಸ್ಯ, ಅವಮಾನ, ಬಡತನ,  ಅಜ್ಞಾನ ಮುಂತಾದವುಗಳನ್ನು  ತೆರಬೇಕಾಗುವುದು.

ಸ್ವತಂತ್ರವಾಗಿ ಬದುಕುವುದಕ್ಕೂ, ನಮ್ಮೊಳಗಿನ ಕೌರ‍್ಯ, ದಿಟ್ಟತನ, ಆಸೆ, ಸಿಟ್ಟು, ಹಟ, ಮೊಂಡತನ, ಜಾಣತನ, ಎಚ್ಚರ ಮುಂತಾದ ಗುಣಗಳಿಗೂ ನೇರಾನೇರ ನಂಟಿದೆ. ನಯವಾದ, ಹೆದರುವ, ಸೌಜನ್ಯವೆಂದು ಬಗ್ಗುವ, ಸಭ್ಯತೆಯೆಂಬ ಕಲ್ಪಿತ ಬೇಲಿಯನ್ನು ಸುತ್ತಿಕೊಂಡ, ಧರ್ಮ-ದೇವರೆಂಬ ಭ್ರಾಂತಿಗಳಿಂದ ಆವೃತವಾದ ಮನಸ್ಸಿಗೆ ಎಂದೂ ಸ್ವಾತಂತ್ರ‍್ಯ ಇರುವುದಿಲ್ಲ, ಸಿಕ್ಕುವುದಿಲ್ಲ.

ಮಾದರಿಯಾಗಿ ಹಸುವನ್ನೋ, ಕುರಿಯನ್ನೋ, ಎಮ್ಮೆಯನ್ನೋ ಇಲ್ಲವೇ  ಅಂತಹ ಸಾಧು, ಪೆದ್ದ, ಕೌರ‍್ಯವಿಲ್ಲದ, ಬಗ್ಗುವ, ಹೆದರುವ ಮಂದಿನ್ನೋ ಸೆರೆಗಯ್ದು ಮೂಗುದಾರ ಬೆಸೆದು ಅವುಗಳನ್ನು ತಮ್ಮ ಇಚ್ಚೆಯಂತೆ ಬದುಕಿಸಿಕೊಂಡೊ, ಸಾಯಿಸಿಕೊಂಡು ಹೋಗಬಹುದು. ಈ ಬಂಧನಕ್ಕೆ ಆ ಪ್ರಾಣಿಗಳಲ್ಲಿರುವ ಕೊರತೆಗಳೇ ಕಾರಣ ಹೊರತು ಅವುಗಳನ್ನು ಸೆರೆಮಾಡಿದವರಲ್ಲ. . ಏಕೆಂದರೆ ಜಗತ್ತು ಇರುವುದೇ ಹೀಗೆ ’ನಿಮ್ಮ ಕುತ್ತುಗಳಿಗೆ ನೀವೇ ಹೊಣೆ’ ಎಂದೇ!

ಆದರೆ ಹುಲಿ, ಮದದಾನೆ, ಸಿಮ್ಮ, ಕಾಡುಕೋಣ  ಇವುಗಳನ್ನು ಅಶ್ಟು ಸಲೀಸಾಗಿ ಸೆರೆ ಮಾಡಲು ಬರುವುದಿಲ್ಲ. ಏಕೆಂದರೆ ಅವುಗಳ ಕೌರ‍್ಯ ಹಾಗು ಆ ಕೌರ‍್ಯದಿಂದ ಹುಟ್ಟುವ ಹೆದರಿಕೆ, ಬೇರೆಯವರನ್ನುಅವುಗಳನ್ನು ಸೆರೆ ಹಿಡಿಸುವ ಸಾಹಸಕ್ಕೆ ಕಯ್ ಹಾಕಲು ಬಿಡುವುದಿಲ್ಲ. ಒಂದು ವೇಳೆ ಅವುಗಳನ್ನು ಸೆರೆಹಿಡಿದರೆ, ಆ ಸೆರೆ ಹಿಡಿದಿವರಲ್ಲಿ ಇವುಗಳಿಂತ ಹೆಚ್ಚುಗೆಯ ದಿಟ್ಟತನ, ಕೌರ‍್ಯ, ಜಾಣತನ ಇದ್ದಿರಬೇಕು.

ಹೀಗೇ ಒಂದು ಜನಾಂಗ, ಗುಂಪು ತನ್ನ ಸ್ವಾತಂತ್ರ‍್ಯವನ್ನು ಉಳಿಸಿಕೊಂಡಿದೆ ಎಂದರೆ ಆ ಜನಾಂಗದ ಜನರಲ್ಲಿ ಬೇರೆಯವರ ಕುರಿತು ಕೌರ‍್ಯವೆಸಗುವ ದಿಟ್ಟತನವಿದೆ, ಜಾಣತನವಿದೆ, ಎಚ್ಚರವಿದೆ, ತಮ್ಮ ಜನಾಂಗದ ಏಳಿಗೆಗೆ ಸಂಪತ್ತುಗಳಿಸುವ ಆಸೆ/ಲೋಭವಿದೆ, ತಮ್ಮತನಕ್ಕಾಗಿ ಜಗ್ಗದ ಮೊಂಡುತನವಿದೆ, ಹಾಗೆ ತಮ್ಮ  ಸುದ್ದಿಗೆ ಬರದಿರುವ ಹಾಗೆ ಹೆದರಿಸುವ ತಾಕತ್ತಿದೆ ಎಂದು.

ಸಾಂಸ್ಕೃತಿಕ ನೀತಿಗಳು, ಸೌಜನ್ಯ, ಗೌರವಗಳೂ, ದೇವರು-ದಿಂಡ ಭಕ್ತಿ, ಸ್ವಾಮಿನಿಷ್ಟೇ, ಸಭ್ಯತೆ ಮುಂತಾದವು ದಾಸ್ಯದ ತರವಾರಿ ಟ್ರೈನಿಂಗ್ಗುಗಳೇ ಹೊರತು ಯಾವ intellectual ಇಲ್ಲವೇ political/physical freedomಗೆ ದಾರಿಯಲ್ಲ.

ಜೀನಿಂದ ಟ್ಯಾಲೆಂಟು ಬರುವುದಂತೆ!

ಇತ್ತೀಚೆಗೆ ವರ್ಣ ಪದ್ದತಿಯ ತಾರತಮ್ಯಕ್ಕೆ ಹಾಗೂ ’ಸಾಂಸ್ಕೃತಿಕ’ ದಬ್ಬಾಳಿಕೆಗೆ ಹಾಗೂ ’ಶ್ರೇಷ್ಠ’ಜನರ ‘ಬೌದ್ಧಿಕ’ ಹಿಡಿತಕ್ಕೆ ಇಂಬಾಗಿ ವಿಜ್ಞಾನದ ಬಳಕೆ ಹೆಚ್ಚಾಗುತ್ತಿದೆ.  ಬಹುಶಃ ಅದು ನಮ್ಮ ಇಂಡಿಯದಲ್ಲಿ ಹೆಚ್ಚು ಏಕೆಂದರೆ ನಮ್ಮ ಕಲಿಕೆ, ವಿದ್ಯಾಭ್ಯಾಸ ಹಾಗೂ ಪಾಂಡಿತ್ಯ ಒಂದು ವರ್ಗದ ಸ್ವತ್ತಾಗಿ ಇಂದಿಗೂ ಇದೆ. ಇದನ್ನೊಪ್ಪದವರೊಮ್ಮೆ ’ಸಾಹಿತ್ಯಕ’, ನ್ಯೂಸ್ ಪೇಪರ್‍, ಧಾರ್ಮಿಕ ಹಾಗೂ ಮುಂತಾದ ಬೌದ್ಧಿಕ ( ಬುದ್ಧಿಗೆ ಸಂಬಂಧಿಸಿದ ) ವಲಯದಲ್ಲಿರುವ ಮಂದಿಯ ವರ್ಗದ ಲೆಕ್ಕವನ್ನೊಮ್ಮೆ ಗಮನಿಸಿಕೊಳ್ಳಬೇಕು.

ವಿಜ್ಞಾನದ ಹೊಸಾನ್ವೇಷಣೆಗಳನ್ನು, ಪ್ರಸಿದ್ಧ ತಿಯರಿಗಳನ್ನು ವೇದದಲ್ಲಿದೆ, ಭಗವದ್ಗೀತೆಯಲ್ಲಿದೆ ಎಂದು ಸಾರುವ ಸಂಘಗಳೇ ಏರ್ಪಟ್ಟಿವೆ. ಐಂಸ್ಟೇನನ ರಿಲೇಟಿವಿಟಿ ತಿಯರಿ ಪುರುಷಸೂಕ್ತದಲ್ಲಿದೆಯಂತೆ.  ರಾಕೆಟ್ ಟೆಕ್ನಾಲಜಿ ಇನ್ನಾವುದೋ ಹಳೆಯ ಸಂಸ್ಕೃತದ ಗ್ರಂಥದಲ್ಲಿದೆಯಂತೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಇವುಗಳ ಸತ್ಯಾಸತ್ಯತೆಯ ಬಗ್ಗೆ ಒರೆಹಚ್ಚುವವರಿಲ್ಲದೇ, ಪ್ರತಿರೋಧಿಸುವವರಿಲ್ಲದೇ ಇಂತಹವು ಹರಡುತ್ತಿದೆ.

ಇಷ್ಟೊಂದೆಲ್ಲ ಜ್ಞಾನಭರಿತ, ಜ್ಞಾನಿಗಳ ಇಂಡಿಯದೇಶ ಅದು ಹೇಗೆ ಬ್ರಿಟೀಶರ ಕೈಹಿಡಿತಕ್ಕೆ ಹೋಯಿತೋ, ಅದು ಹೇಗೆ ಇಂಡಿಯದಲ್ಲಿನ್ನೂ ಅಜ್ಞಾನ, ಮೌಢ್ಯ ಹಾಗೂ ಕಂದಾಚಾರಗಳು ಪ್ರಚುರವಾಗಿ, ದೇಶ ಹಿಂದುಳಿದುಕೊಂಡಿದೆಯೋ ಎಂಬುದಕ್ಕೆ ವಿವರಣೆ ಹೊಳೆಯುವುದೇ ಇಲ್ಲ. ಅದಕ್ಕೂ ಪುನಃ ಒಂದು ವರ್ಣದವರು, ಸಾಂಪ್ರದಾಯಿಕ, ಶಾಸ್ತ್ರಾನುಸಾರೇಣ ’ಪೆದ್ದ’ರಾಗೇ ಇರಬೇಕಾದವರು ಹೆಚ್ಚಾಗಿ ದೇಶದಲ್ಲಿದ್ದಾರೆ ಅದಕ್ಕೆ, ಅವರ ಹುಟ್ಟಿನಿಂದ ಅವರಲ್ಲಿ ಜ್ಞಾನ ಬೆಳೆಸುವುದು ಸಾಧ್ಯವೇ ಇಲ್ಲ ಎಂಬ ಮಾತು ಉತ್ತರವಾಗಿ ಕೇಳಿ ಬಂದಿತ್ತೊಮ್ಮೆ ನನಗೆ. ಹಾಗು ಇರಬಹುದೇನೋ!

ಇತ್ತಿಚೆಗೆ ಜೆನೆಟಿಕ್ಸ್ ಎಂಬ ವಿಜ್ಞಾನಶಾಖೆ ತುಂಬಾ ಹೆಸರುವಾಸಿಯಾಗಿದೆ. ನೆನ್ನೆ ನಾನು ಕೇಳಿದಂತೆ ವರ್ಣಾಶ್ರಮವನ್ನು ಸೃಜಿಸಿದವರಿಗೆ ಜೆನೆಟಿಕ್ಸ್ ಗೊತ್ತಿತ್ತಂತೆ. ಉತ್ತಮವಾದ ಜೀನ್ ಹೊಂದಿದ ವ್ಯಕ್ತಿ ಹುಟ್ಟಿನಿಂದಲೇ ಉತ್ತಮನಾಗಿರುತ್ತಾನಂತೆ ಹಾಗೂ ಕೀಳು-ಜೀನಿನ ಮಂದಿಗೆ ಉತ್ತಮತನ ಪ್ರಯತ್ನದಿಂದಲೂ ಸಾಧ್ಯವಿಲ್ಲವಂತೆ. ಇದಕ್ಕೆ ಮಾದರಿಯಾಗಿ ಕುದುರೆಗೆ ಉತ್ತಮವಾದ ಜೀನುಗಳಿರುವುದರಿಂದ ಅದು ವೇಗವಾಗಿ ಓಡುವುದಂತೆ, ಅದೇ ಕತ್ತೆಗೆ ಕೀಳುಜೀನುಗಳು ಇರುವುದರಿಂದ ಅದು ಕುದುರೆಗೆ ಸಮವಲ್ಲವಂತೆ. ಬೊಯೋಲಜಿಯ ಮಂದಿ ಈ ತಾಳೆಯನ್ನು ಪರಿಷ್ಕರಿಸಿ ತಿಳಿಸಬೇಕು.

ಒಟ್ಟಿನಲ್ಲಿ ವಿಜ್ಞಾನವನ್ನು ಹೀಗೆ ಬಳಸಿಕೊಂಡು ಪುರಾತನ ಸಂಸ್ಕೃತಿಯ ಉನರುಜ್ಜೀವನಕೃಷಿಯನ್ನು ಯಶಸ್ವಿಸುತ್ತಿದ್ದಾರಂತೆ. ಆದರೆ ಹೆಚ್ಚಿನ ವಿಜ್ಞಾನಿಗಳು, ಬೊಯೋಲಜಿಸ್ಟರು ಅದು ಯಾಕೆ ನಾಸ್ತಿಕರಂತಲ್ಲ! ಹೆಚ್ಚಾಗಿ ಈ ಧಾರ್ಮಿಕ ಬಳಕೆಗೆ ತುತ್ತಾಗುವ ವಿಜ್ಞಾನಶಾಖೆಯ ವಿಜ್ಞಾನಿಗಳೆಲ್ಲ ನಾಸ್ತಿಕರಾಗಿದ್ದಾರೆಂದು ಕೆಲವು ಸ್ಟಾಟಿಸ್ಟಿಕ್ಸುಗಳು ಹೇಳುವುವಲ್ಲ.

ಈ ಬಗೆಯಲ್ಲಿ ಪ್ರಶ್ನಿಸುವವರು ಮೋಸಗಾರರು, ತಾವೇನೋ ವಿಶೇಷ ಎಂಬ ಮೇಲ್ಮೆ ಸಾಧಿಸ ಹೊರಟವರೆಂಬ ಮಾತು ಇದೆ. ಪ್ರಶ್ನಿಸುವವರ ಏಕೈಕ ಉದ್ದೇಶ ತಮ್ಮ ಸಿದ್ಧಾಂತಗಳು, ತಮ್ಮ ಅರೆಬೆಂದ ತಿಳುವಳಿಕೆಯನ್ನು ಪಸರಿಸಿ, ಖ್ಯಾತಿ-ಗಿಟ್ಟಿಸಿಕೊಳ್ಳುವುದಂತೆ.

ಏನೋಪ್ಪ.. !!!

ಮನಸ್ಸು ಬಿಸಾಕಿದ ವ್ಯಕ್ತಿಗಳು

ಈ ಬರಹದಲ್ ನಾನೇನ್ ಹೇಳಕ್ ಹೊರಟಿದ್ದೀನಂತ ನಂಗೆ ಪೂರ್ತಿ ಕ್ಲಿಯರ್‍ ಆಗ್ ಹೇಳಕ್ ಆಗದೇ ಹೋಗ್ ಬೋದು.  ಹಂಗೇ  ಈ ಬರಹಕ್ ಕರೆಕ್ಟಾದ ಟಯ್ಟಲ್ ಇಟ್ಟಿದ್ದೀನಿ ಅಂತನೂ ನನಗೆ ನೆಚ್ಚಿಲ್ಲ. ಒಟ್ರಾಸೆ ಈ ಬರಹ ಬರೀ ನಾನ್ ಹೇಳಬೇಕು ಅಂತ ಅಂದುಕೊಂಡ್ ಇರೋದನ್ ಹೇಳತ್ತೆ. ಅಶ್ಟೇ.

ಚಿಕ್ಕವನ್ ಆಗ್ ಇದ್ದಾಗ್ಲಿಂದ ನನಗ್ ಫ಼್ರೆಂಡ್ಗಳು ತುಂಬಾ ಕಡಮೆ. ಆದ್ರೆ ಇರೋ ಪ್ರೆ಼ಂಡ್ಗಳ ಬಗ್ಗೆ ತುಂಬಾ ಅಟಾಚ್ಮೆಂಟ್ ಹಾಗು ಕಾಳಜಿ. ಹಾಗೆ ಮೋಸ ಮಾಡಿದ ಗೆಳೆಯರ ಮೇಲೆ ಸಿಟ್ಟಿನ ಸೇಡು.  ಕಳೆದ ಒಂದುವರೆ ವರ್ಶದಿಂದ ನಡವಳಿಕೇಲಿ ತುಂಬಾ ಬದಲಾವಣೆಯಾಗಿದೆ.

ಈ ಬದಲಾವಣೆಗಳಲ್ ನಾನ್ ಕಲಿತ ಕೆಲವು ಪಾಠ ಏನ್ ಅಂದ್ರೆ, ನಾವು ಯಾರೋ ಒಬ್ರು ನಮ್ ಜತೆ ಇರಲಿ, ನಮ್ ಜತೆ ಮಾತಾಡಲಿ ಅಂತ ಹಂಬಲಿಸಿಕೊಂಡ್ ನಮ್ ಮನಸ್ಸನ್ ಬೇಜಾರ್‍ ಮಾಡ್ಕೊತಿರ್‍ತೀವಿ. ಹಂಗೇ ನಾವ್ ನಮ್ ಇಶ್ಟದ ಗೆಳೆಯ(ತಿ) ಅಂತ ಅವರಿಗೆಲ್ಲ ಹೆಲ್ಪ್ ಮಾಡಿ, ಇನ್ ರಿಟರ್‍ನ್ ಏನೂ ಬಯಸದೇನೂ ಇರ್‍ತೀವಿ. ಆದ್ರೆ ಇವೆಲ್ಲ ನಮ್ ಮನಸ್ಸಿನ್ ವೀಕ್ನೆಸ್ಸು. ನಾವ್ ಯಾರನ್ ಎಶ್ಟು ಹತ್ರ ಅಂತ ಅಂದುಕೊತೀವೋ ಅವರೂ ಕೂಡ ನಮ್ಮನ್ ಅಶ್ಟೇ ಹತ್ರ ಅಂತ ಅಂದುಕೊಬೇಕಿಲ್ಲ. ಹಂಗೆ ನಾವ್ ಕಾಳಜಿ ಮಾಡಿದೋರ್‍ ನಮ್ಮನ್ ಕಾಳಜಿ ಮಾಡಬೇಕೂ ಅಂತಿಲ್ಲ. ಅದೇ ವಾಸ್ತವ.

ಹಿಂಗೆ,

ಯಾರನ್ನೋ ಹತ್ರ ಅಂದುಕೊಂಡ್ ಅವರ್‍ ನಮ್ಮನ್ ಇಗ್ನೋರ್‍ ಮಾಡಿದಾಗ ಬೇಜಾರ್‍ ಮಾಡಿಕೊಂಡ್, ನಮ್ ಲಯ್ಪ಼್ ಹಾಳ್ ಮಾಡ್ಕೊಳ್ಳಕ್ಕಿಂತ ನಮ್ಮನ್ ಇಗ್ನೋರ್‍ ಮಾಡಿದವರನ್ ನಾವ್ ಇಗ್ನೋರ್‍ ಮಾಡೋ ಮನಸ್ ಕಟ್ಕೋಬೇಕು.

ಹಲವ್ ಜನ ಹೆಂಗೆ ಅಂದ್ರೆ, ಅವರಿಗೆ ಯೂಸ್ ಆಗೋ ತನಕ ನಮ್ ಜತೆ ಚನ್ನಾಗ್ ಸಕ್ಕತ್ತಾಗ್ ಮಾತಾಡ್ತಾರೆ, ಕೆಲಸ ಆದ್ ಮೇಲೆ ಇಗ್ನೋರ್‍ ಮಾಡ್ತಾರೆ. ಅದಕ್ ನಾವ್ ಯಾವಾಗ್ಲೂ ನಮ್ಮನ್ ಯೂಸ್ ಮಾಡಿಕೊಳ್ಳೋರನ್ನ, ನಾವ್ ಯೂಸ್ ಮಾಡಿಕೊಳ್ತಾನೇ ಇರ್‍ಬೇಕು. ಹಂಗೇ ನಾವ್ ಯೂಸ್ ಮಾಡಿಕೊಂಡೋರಿಗೆ ನಾವ್ ಯೂಸ್ ಆಗ್ತಿರಬೇಕು ಎಂದ್ ರುಣಕ್ ಮಾತ್ರ ಕಟ್‌ಬೀಳಬಾರದು.  ಈ ರುಣ ಅನ್ನೋದು ಒಂದು ಬಗೆಯ ಮನೋವೇದನೆ. ಈ ರುಣ ಅನ್ನೋದನ್ನೇ ನಮ್ ತಲೆಯಿಂದ ಕಿತ್ ಹಾಕಿದರೆ,  ನಾವ್ ಯಾರೋ ಹೆಲ್ಪ್ ಮಾಡಿದರೆ, ಸಾಲ ಇಸ್‌ಕೊಂಡಂಗೆ ಒದ್ದಾಡ್ ಕೊಂಡು, ಅವರಿಗೆ ಪ್ರತಿಹೆಲ್ಪ್ ಮಾಡಕ್ ತಿಣುಕಾಡ್ತಿರ್‍ತಲ್ಲ.

ನಾವ್ ಒಬ್ಬರಿಗೆ ಮೋಸ ಮಾಡಿದರೆ ನಮಗ್ ಬೇಜಾರಾಗಲ್ಲ. ಆದರೆ ನಾವ್ ಮೋಸ ಹೋದರೆ ಸಕ್ಕತ್ ಬೇಜಾರ್‍ ಆಗತ್ತೆ. ಅದಕ್ಕೆ ಯಾವಾಗಲೂ ಬೇಜಾರಿಲ್ದೇ ಇರಬೇಕಂದ್ರೆ ನಾವ್ ಮೋಸ ಮಾಡಿದ್ರೆ, ಮೋಸ ಹೋಗಬಾರದು. ಇದು ಕೆಟ್ಟಬುದ್ದಿ ಎಂದು ಅನ್ನಿಸ್‌ಬೋದು.  ಆದರೆ ಕೆಟ್ಟದು, ಒಳ್ಳೇದು ಅನ್ನೋದು ರಿಲೇಟಿವ್. ನನಗೆ ಒಳ್ಳೇದಾದ್ರೆ ಒಳ್ಳೇದು ಕೆಟ್ಟದ್ ಆದ್ರೆ ಕೆಟ್ಟದ್ದು.

ನನಗೆ ಕಾಟ ಕೊಟ್ಟರೆ ಅವರಿಗೆ ಅದರ ಎರಡರಶ್ಟ ಕಾಟ ಕೊಡಬೇಕು. ನನಗೆ ಒಳ್ಳೇದು ಮಾಡಿರೋರು ಬಂದು ಕೇಳಿದರೆ ಅವರಿಗೆ ಒಳ್ಳೇದು ಮಾಡೋದು. ಸುಮ್ ಸುಮ್ನೆ ನೆರವಾಗೋದು, ಒಳ್ಳೇಯೋರು ಅನ್ನಿಸಿಕೊಳ್ಳೋದು ಒಂದು ಕೆಟ್ಟಚಟ. ಅದರಿಂದಲೇ ನಮ್ಮ ನೆಮ್ಮದಿ ಹಾಳಾಗೋದು.

ಹೀಗೆ ನನ್ ಮನಸ್ಸು  ಬೇಕಾದಶ್ಟ್ ವ್ಯಕ್ತಿಗಳನ್ ತಲೆಯಿಂದ ಕಿತ್ ಬಿಸಾಕಿದೆ. ಅವರನ್ ನಾನು ನೆನೆಸಿಕೊಳ್ಳೋದಿರಲಿ, ಅವರು ನೆನೆಸಿಕೊಳ್ಳಲೂ ಬಾರದು ಹಂಗೂ ಮಾಡಿದ್ದೀನಿ. ಇದನ್ನೆಲ್ಲ ಕೆಟ್ಟದ್ದು, ಒಳ್ಳೇದು ಎಂದು ಅಳೆಯೋರಿಗೆ ನಮೋ ನಮಃ! ನನ್ ಉಸಾಬರಿಗೇ ಬರ್‌ಬೇಡಿ! :)

ಸರ್ವಜ್ಞನಾದ ತಿರುವಳ್ಳುವರ್‍

ತಿರುವಳ್ಳುವರ್‍

ತಿರುವಳ್ಳುವರ್‍

ತಿರುವಳ್ಳುವರ್‍ ಯಾರು ಎಂದು ಏನಾದರು ಸಾಮಾನ್ಯ ಕನ್ನಡಿಗನೊಬ್ಬನಿಗೆ ಕಳೆದ ವರ್ಷ ಕೇಳಿದ್ದರೆ, ಅವನು ’ನನಗೆ ಗೊತ್ತಿಲ್ಲ’ ಎಂದು ಹೇಳುತ್ತಿದ್ದ. ಸನ್ಮಾನ್ಯ ಕರ್ಣಾಟಕ ರಾಜ್ಯ ರಮಾರಮಣ, ಭಾರತೀಯ ಜನತಾಪಾಲ ಶ್ರೀಯಡಿಯೂರಪ್ಪರ ದೆಸೆಯಿಂದ, ಪ್ರತಿಯೊಬ್ಬ ಕನ್ನಡಿಗನೂ, ’ತಿರುವಳ್ಳುವರ್‍ ಯಾರು’ ಎನ್ನುವ ಪ್ರಶ್ನೆಗೆ,  ತಿರುವಳ್ಳುವರ್‍ ಎಂದರೆ ಒಬ್ಬ ಶ್ರೇಷ್ಠ, ಮೇರು, ಸಂತ, ಉತ್ತಮ ತಮಿಳು ಕವಿ ಎಂದು ಉತ್ತರಿಸುತ್ತಾನಿಂದು.

ಹೀಗೆ ತಿರುವಳ್ಳುವರ್‍ ಎಂಬ ತಮಿಳು ಕವಿ ಕನ್ನಡ ನೆಲದಲ್ಲಿ ಪ್ರಖ್ಯಾತನಾಗಲು ಮಾನ್ಯ ಯಡಿಯೂರಪ್ಪರು ಪ್ರಮುಖ ಕಾರಣಕರ್ತರು ಎಂದು ಪಾಪ ಅವರಂನಂದು ಯಾಕೆ ಪಾಪ ಕಟ್ಟಿಕೊಳ್ಳಬೇಕು? ತಿರುವಳ್ಳುವರರ ಪ್ರಖ್ಯಾತಿ ಕನ್ನಡದ ನೆಲದಲ್ಲಿ ಹೆಚ್ಚಿಸಿದವರೇ ನಮ್ಮ ’ಕನ್ನಡ ಹೋರಾಟ’ಗಾರರು. ಈ ’ಕನ್ನಡ ಹೋರಾಟ’ ಅನ್ನೋದೇ ಅಚ್ಚ-ಕನ್ನಡದ ವ್ಯಾಕರಣ ಪಾಲಿಸದ ಪದಪುಂಜ. ವ್ಯಾಕರಣ ಹಾಳಾಗಿ ಹೋಗಲಿ. ಒಟ್ಟನಲ್ಲಿ ಯಥಾ ಪ್ರಕಾರ ’ಶಿವಾಜಿ’ ಎನ್ನುವ ತಮಿಳು ಸಿನಿಮಕ್ಕೆ ಜಾಹಿರು ದೊರಕಿಸಿ ಕೊಡವಲ್ಲಿ ಹೇಗೆ ನಮ್ಮ ’ಕನ್ನಡ ಹೋರಾಟ’ಗಾರರು ಸಫಲರಾದರೋ, ಹಾಗೇ ತಿರುವಳ್ಳುವರರ ಪ್ರಖ್ಯಾತಿಯ ವೃದ್ಧಿಗೂ ಅವರು ಸಮರ್ಥಶ್ರಮರಾದರು. ಮುಂದಿನ ವರ್ಷ ಕರ್ನಾಟಕದ ಶಾಲಾಪಠ್ಯಪುಸ್ತಕಗಳಲ್ಲಿ ’ತಿರುವಳ್ಳವರ್‍’ ಎಂಬ ಪಾಠ ಬಂದರೆ, ಮುಂದೆ ಹಲಸೂರು ಹೋಗಿ ’ತಿರುವಳ್ಳುವರ್‍ ನಗರ’ವಾದರೆ  ಕನ್ನಡಿಗರು ಆಶ್ಚರ್ಯ ಪಟ್ಟು, ಸುಮ್ಮನೆ ತಮ್ಮ ಪೆದ್ದುತನ ತೋರಿಸಬೇಕಿಲ್ಲ.

ಇದೇ ಸನ್ನಿವೇಶವನ್ನು ತಮಿಳುನೆಲ ಹೇಗೆ ಕಾಣುತ್ತಿದೆ. ಅಲ್ಲಿ ಸರ್ವಜ್ಞನ ಬೊಂಬೆಯನ್ನು ನಿಲ್ಲಿಸುವುದಕ್ಕೆ ಯಾವ ವಿರೋಧವೂ ಇಲ್ಲ, ಅಂದರೆ ಯಾವ ಜಾಹಿರೂ ಇಲ್ಲ. ಅಂದರೆ ತಮಿಳರಿಗೆ ಹಿಂದೆ ಸರ್ವಜ್ಞ ಎಷ್ಟು ಅಪರಿಚಿತನೋ, ಇಂದೂ ಹಾಗೆ.

ಮಾಯ್ಸನ ಪ್ರಕಾರ ತಿರುವಳ್ಳುವರರ ಪ್ರತಿಮೆಯ ಅನಾವರಣಕ್ಕೆ ಕನ್ನಡಿಗರು ವಿರೋಧಪಡಿಸಿದ್ದು ಸರಿಯಲ್ಲ!  ಯಾಕೆಂದರೆ ಕನ್ನಡ ಕವಿಗಳ ಪ್ರತಿಮೆಗಳು ಡೆಲ್ಲಿಯಲ್ಲಿದೆ, ಕೇರಳದಲ್ಲಿದೆ ಹಾಗು ಮಹಾರಾಷ್ಟ್ರದಲ್ಲಿದೆ. ಹಾಗೂ ತಮಿಳುನಾಡು ಸರ್ವಜ್ಞನ ಪ್ರತಿಮೆಯನ್ನು ಅನಾವರಣಗೊಳಿಸಲು ಅನುವು ನೀಡುವೆವು ಎಂದು ಹೇಳಿದ ಮೇಲೂ ಅದಕ್ಕೆ ವಿರೋಧ, ಮೊಂಡುಹಠವೆನಿಸಿತು. ಇವರ ವಿರೋಧದಿಂದ ತಿರುವಳ್ಳುವರರು ಇನ್ನೂ ಹೆಚ್ಚು ಹೆಸರುವಾಸಿಯಾದರೇ ಹೊರತು, ಅವರ ಕಳೆಯೇನೂ ಕುಂದಲಿಲ್ಲ.

ಇನ್ನು ಭಾಷಾಸಾಮರಸ್ಯದ ಹೆಸರಿನಲ್ಲಿ ಹಿಂದುತ್ವದ ಯಡಿಯೂರಪ್ಪರು, ನಾಸ್ತಿಕ ಕರುಣಾನಿಧಿಯವರ  ಕೈಜೋಡಿಸಿರುವುದರ ಹಿಂದಿನ ರಾಜಕೀಯ ಮರ್ಮ ಯೋಚಿಸತಕ್ಕದ್ದು. ಕೇಂದ್ರ ಸರಕಾರವನ್ನು ಬೀಳಿಸಿವ ತಂತ್ರವೋ, ವಿದ್ಯುತ್ ಸಮಸ್ಯೆ ನೀಗಿಸಲು ಯಾಚನೆಯೋ, ಗೊತ್ತಿಲ್ಲ.

ಏನೇ ಆದರು ಪಾಸಿಟಿವ್ ಆಗಿ ನೋಡಿದರೆ, ಕರ್ನಾಟಕದಲ್ಲೇ ಎಲ್ಲೂ ಸರ್ವಜ್ಞನ ಪ್ರತಿಮೆಯಿಲ್ಲವಂತೆ, ಅಂದ ಮೇಲೆ ಚನೈಯಲ್ಲಿ ಸರ್ವಜ್ಞನ ಪ್ರತಿಮೆ ನಿಂತಿರುವುದು ಹೆಮ್ಮೆಯ ವಿಷಯವೇ. ಅಂತೂ ಇದರಿಂದಲಾದರೂ ಕೊಂಚ ಸರ್ವಜ್ಞನ ಹೆಸರು ನಮ್ಮ ಸೋ ಕಾಲ್ಡ್ ನ್ಯಾಶನಲ್ ಮೀಡಿಯದಲ್ಲಿ ಬಂತು.

ಅಂದ ಹಾಗೆ, ಅನವಶ್ಯಕ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಯಾಕೆ ನಮ್ಮ ಕನ್ನಡ ಹೋರಾಟಗಾರರು ಇಷ್ಟು ಗಟ್ಟಿಯಾಗಿ ವಿರೋಧಿಸುತ್ತಿಲ್ಲ? ಶಾಸ್ತ್ರೀಯ ಕನ್ನಡದ ವಿಶ್ವವಿದ್ಯಾನಿಲಯ ಯಾವಾಗ ಬರುವುದಂತೆ? ಕನ್ನಡದಲ್ಲಿ ವಿಜ್ಞಾನದ ಉನ್ನತ ಕಲಿಕೆಯನ್ನು ಯಾವಾಗ ಶುರು ಮಾಡುತ್ತಾರಂತೆ?  ಅಯ್ಯೋ ಅದೆಲ್ಲ ಸದ್ಯ ನಮಗೆ ಯಾಕೆ ಬಿಡಿ!

ರಸ್ತೆ, ಚಲನೆ, ಪವಾಡಗಾರ ವಿಜ್ನಾನ

ರಸ್ತೆ

ರಸ್ತೆ ಮಾರ್ಗ ದಾರಿ ಬೀದಿ

ಓಣಿ ಗಲ್ಲಿ ರೋಡು ಹಾದಿ

ಎಶ್ಟೊಂದು ಹೆಸರುಗಳು

ಬರೀ ಸರಿದಾಡುವ ನೆಲಕ್ಕೆ?

ಚಲನೆ

ಬಿರಬಿರನೆ ಮೆಲ್ಲನೆ

ಡಬ್ಬಕ್ಕನೆ ಮೆತ್ತಗೆ

ತೆವಳು ಓಡು ನಡೆ

ಅಯ್ಯೋ..ಸದ್ಯ ಚಲನೆ ಇದೆಯಲ್ಲ!

ಪವಾಡಗಾರ ವಿಜ್ನಾನ

ಕೀಬೋರ್ಡು ಮವ್ಸು ಮಿನ್ತೆರೆ

ಕಪ್ಪುಡಬ್ಬದ ಪ್ರೊಸೆಸರ್ರ‍ ರ್‍ಯಾಮು

ವಯ್ರುಗಳು ಮೋಡೆಮ್ಮು ಇಂಟರ್‍ನೆಟ್ಟು

ಹಾ.. ಕೂತಲ್ಲೇ ವಿಸ್ಮಯ ಲೋಕ

ಭಲೆ ವಿಜ್ನಾನ! ಪವಾಡಪುರುಷ ದಿವ್ಯ ನೀನು